Slide
Slide
Slide
previous arrow
next arrow

ದ್ವಿಚಕ್ರ ವಾಹನಗಳ ನಡುವೆ ಅಪಘಾತ : ಇಬ್ಬರಿಗೆ ಗಾಯ

300x250 AD

ಜೋಯಿಡಾ: ತಾಲೂಕಿನ ಉಳವಿ – ಕುಂಬಾರವಾಡ ರಸ್ತೆಯಲ್ಲಿ ದ್ವಿಚಕ್ರ ವಾಹನವೊಂದಕ್ಕೆ ಇನ್ನೊಂದು ದ್ವಿಚಕ್ರ ವಾಹನ ಹಿಂದಿನಿಂದ ಬಂದು ಡಿಕ್ಕಿಯಾದ ಪರಿಣಾಮ ಇಬ್ಬರಿಗೂ ಗಾಯವಾದ ಘಟನೆ ನಡೆದಿದೆ.

ಧಾರವಾಡದ ಮಾರಡಗಿ ಗ್ರಾಮದ ನಿವಾಸಿ ಮಂಜೂರ ಆಲಿ ಹಸನಸಾಬ ಸವಣೂರು ಮತ್ತು ಸಚಿನ ಮರೆಪ್ಪ ತಳವಾರ ಎಂಬಿಬ್ಬರು ಉಳವಿ-ಕುಂಬಾರವಾಡ ರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಹಿಂದುಗಡೆಯಿಂದ ಅತಿಯಾದ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದ ದ್ವಿಚಕ್ರ ವಾಹನವೊಂದು ಹಿಂದುಗಡೆಯಿಂದ ಡಿಕ್ಕಿ ಮಾಡಿದೆ.

300x250 AD

ಈ ಸಂದರ್ಭದಲ್ಲಿ ಈ ಇಬ್ಬರಿಗೂ ಗಂಭೀರ ಗಾಯವಾಗಿದೆ. ಅಪಘಾತ ಪಡಿಸಿದ ವ್ಯಕ್ತಿ ಧಾರವಾಡದ ಮಾರಡಗಿ ನಿವಾಸಿ ವಿಜಯ ಕುಮಾರ ಮಲ್ಲಪ್ಪ ಹುಬ್ಬಳ್ಳಿಯಾಗಿದ್ದು, ಈತನ ಮೇಲೆ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳುವಂತೆ ಜೋಯಿಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share This
300x250 AD
300x250 AD
300x250 AD
Back to top